August 7, 2025

ತಾಯಿಯ ಹಾಲು – ಮಗುವಿಗೆ ಅಮೃತ : ಪ್ರೊ. ಜಯಶ್ರೀ ಇಟ್ಟಿ

ಬಾಗಲಕೋಟೆ: ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಬಿ.ವಿ.ವಿ.ಎಸ್ ನರ್ಸಿಂಗ್ ವಿಜ್ಞಾನ ಮಹಾವಿದ್ಯಾಲಯದ ವತಿಯಿಂದ ಸ್ತನ್ಯಪಾನದ ಮಹತ್ವವನ್ನು ಸಾರುವ ಕಾರ್ಯಕ್ರಮವನ್ನು ಬಾಗಲಕೋಟೆ ತಾಲ್ಲೂಕಿನ ಕೌಲಪೇಟದಲ್ಲಿಯ ಅಂಗನವಾಡಿ ಕೇಂದ್ರ ಸಂಖ್ಯೆ 30ರಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯೆ ಪ್ರೊ. ಜಯಶ್ರೀ ಇಟ್ಟಿ ಅವರು ವಹಿಸಿದ್ದರು. ಬಳಿಕ ಮಾತನಾಡಿದ ಅವರು,  “ತಾಯಿಯ ಎದೆ ಹಾಲು ಮಗುವಿಗೆ ಬಹುಮುಖ್ಯ. ಸ್ತನ್ಯಪಾನದಿಂದ ಮಗುವಿಗೆ ಶಕ್ತಿ, ರೋಗ ನಿರೋಧಕ ಶಕ್ತಿ ಮತ್ತು ಸಂಪೂರ್ಣ ಪೌಷ್ಟಿಕಾಂಶ ದೊರೆಯುತ್ತದೆ. ಈ ಹಾಲು ಮಕ್ಕಳಿಗೆ ಸೈನಿಕ ಶಕ್ತಿಯಂತೆ ರಕ್ಷಣೆ

Read More »

ಆ.10 ರಿಂದ  ಗುರು ಸಾರ್ವಭೌಮರ 354 ನೇ ಆರಾಧನಾ ಮಹೋತ್ಸವ

ಕಮತಗಿ : ಪಟ್ಟಣದ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ಕಲಿಯುಗದ ಕಾಮಧೇನು ಶ್ರೀ ಗುರು ಸಾರ್ವಭೌಮರ 354 ನೇ ಆರಾಧನಾ ಮಹೋತ್ಸವವು ಇದೇ ಆಗಸ್ಟ 10 ರಿಂದ 12 ರ ವರೆಗೆ  ನಡೆಯಲಿದೆ.  ದಿ. 08 ರಂದು ಸಾಯಂಕಾಲ ಧ್ವಜಾರೋಹಣ. ಗೋಪೂಜೆ. ಧಾನ್ಯ ಪೂಜೆ.  ಆಗಸ್ಟ 09 ರಂದು ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ನಡೆಯಲಿದ್ದು. ದಿ. 10 ಪೂರ್ವಾರಾಧನೆ. 11 ರಂದು ಮಧ್ಯಾರಾಧನೆ  12 ರಂದು  ಉತ್ತರಾರಾದನೆ ನಡೆಯಲಿದ್ದು ನಿತ್ಯವು ಬೃಂದಾವನಕ್ಕೆ ಕಾಕಡಾರತಿ. ಪಂಚಾಮೃತ ಅಭಿಷೇಕ.

Read More »

ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಕೂಡ ಕೇಂದ್ರ ಆಯೋಗವೇ ನಡೆಸಲಿ – ನಾಗೇಶ ಎನ್.

ಬಾಗಲಕೋಟೆ: ರಾಜ್ಯದಲ್ಲಿನ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಕೇಂದ್ರ ಚುನಾವಣಾ ಆಯೋಗದ ಮೂಲಕವೇ ನಡೆಸಬೇಕು ಎಂದು  ಜನತಾ ಪಕ್ಷದ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ನಾಗೇಶ ಎನ್. ಆಗ್ರಹಿಸಿದರು.   ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ಕಾಲಕಾಲಕ್ಕೆ ತಕ್ಕಂತೆ ಎಲ್ಲ ಚುನಾವಣೆಗಳನ್ನು ಕೇಂದ್ರ ಆಯೋಗವೇ ನಡೆಸುತ್ತಿದೆ. ಅದೇ ಮಾದರಿಯಲ್ಲಿ ರಾಜ್ಯದಲ್ಲಿಯೂ ಜಾರಿಯಾದರೆ ತಾಲ್ಲೂಕು, ಜಿಲ್ಲಾ ಪಂಚಾಯತ್‌ಗಳಿಗೆ ಕಾಲಮಿತಿಯಲ್ಲಿ ಚುನಾವಣೆ ನಡೆಯುತ್ತದೆ. ವಿಧಾನಸೌಧದತ್ತ ಜನರೇ ಹೋಗುವ ಸ್ಥಿತಿ ಸರಿಯಲ್ಲ ಎಂದ ಅವರು, ರೈತರ ಸಮಸ್ಯೆ ಕೇಳಲು

Read More »

ಒಳಮೀಸಲಾತಿ ವಿಚಾರದಲ್ಲಿ ತರಾತುರಿ ಬೇಡ – ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ

ಬಾಗಲಕೋಟೆ: ಪ್ರಸ್ತುತ ಚರ್ಚೆಯಲ್ಲಿರುವ ಒಳಮೀಸಲಾತಿ ಸಂಬಂಧಿತ ನಿರ್ಧಾರದಲ್ಲಿ ಸರಕಾರ ಯಾವುದೇ ತರಾತುರಿ ತೋರಬಾರದು. ಜನಗಣತಿಯ ಅಂಕಿ ಅಂಶಗಳು ಸಂಪೂರ್ಣವಾಗಿ ನಿಖರವಾಗಿರುವುದು ಅಗತ್ಯ. ಈ ಮೂಲಕ 101 ಪರಿಶಿಷ್ಟ ಜಾತಿಗಳಿಗೆ ಯಾವುದೇ ರೀತಿಯ ಅನ್ಯಾಯ ಅಥವಾ ಲೋಪ ಸಂಭವಿಸದಂತೆ ನೋಡಿಕೊಳ್ಳಬೇಕೆಂದು ಭೋವಿ ಗುರುಪೀಠದ ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು  ಅವರು ಮಾತನಾಡಿದರು. “2011ರ ಕೇಂದ್ರ ಜಾತಿಗಣತಿ ಪ್ರಕಾರ ಶೇಕಡಾ 4.7%ರಷ್ಟು ಭೋವಿ ಸಮುದಾಯದ ಸಂಖ್ಯೆಯು ತೋರಿಸಲಾಗಿದೆ. ಆದರೆ ಅದು ನಿಖರವೋ

Read More »