Breaking news

Breaking news

ಈದ್ ಮಿಲಾದ್ ಹಬ್ಬ: ಭವ್ಯ ಮೆರವಣಿಗೆ

ಬಾಗಲಕೋಟೆ: ಈದ್ ಮಿಲಾದ್ ಹಬ್ಬದ ಅಂಗವಾಗಿ ಬುಧವಾರ ಬಾಗಲಕೋಟೆ ನವನಗರದಲ್ಲಿ ಮುಸ್ಲಿಂ ಬಾಂಧವರು ಭವ್ಯ ಮೆರವಣಿಗೆ ನಡೆಸಿದರು. ನವನಗರದಲ್ಲಿರುವ ಅಂಜುಮನ್ ಸಂಸ್ಥೆಯ ಆವರಣದಿಂದ ಮೆರವಣಿಗೆಗೆ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಅಯ್ಯುಬ ಪುಣೇಕರ ಚಾಲನೆ ನೀಡಿದರು. ಮೆರವಣಿಗೆಯು ಕಾಳಿದಾಸ ವೃತ್ತ, ಜಿಲ್ಲಾಸ್ಪತ್ರೆ, ಎಲ್‌ಐಸಿ ವೃತ್ತ, ಅಂಬೇಡ್ಕರ್ ಭವನ ಸೇರಿದಂತೆ ನವನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕುಬಾ ಮಸೀದಿಗೆ ಬಂದು ಸಮಾಪ್ತಿಯಾಯಿತು. ಮೆರವಣಿಗೆಯಲ್ಲಿ ಸಾಂಪ್ರದಾಯಿಕ ವಾದ್ಯ, ಧಾರ್ಮಿಕ ಧ್ವಜಗಳು ಹಾಗೂ ಅಲಂಕೃತ ವಾಹನಗಳು ಆಕರ್ಷಣೆಯಾಗಿದ್ದವು. ವಿವಿಧ ಮಸೀದಿಗಳ ಮಕ್ಕಳು, ಧಾರ್ಮಿಕ

Read More »
Breaking news

ಉತ್ತಮ ತಂತ್ರಜ್ಞಾನ, ಉತ್ತಮ ವ್ಯಕ್ತಿತ್ವ – ಬಿ.ಇ.ಸಿ.ಯ ಗುರಿ : ಡಾ. ಹೆರಕಲ್

ಬಾಗಲಕೋಟೆ: ಬಸವೇಶ್ವರ ಇಂಜಿನಿಯರಿಂಗ್ ಕಾಲೇಜು (ಬಿ.ಇ.ಸಿ) ಬಾಗಲಕೋಟೆ ಜಿಲ್ಲೆಯಲ್ಲಷ್ಟೇ ಅಲ್ಲ, ಇಡೀ ಕರ್ನಾಟಕದಲ್ಲಿಯೇ ತಾಂತ್ರಿಕ ಶಿಕ್ಷಣದಲ್ಲಿ ಶ್ರೇಷ್ಠ ಇತಿಹಾಸವನ್ನು ಹೊಂದಿರುವ ಕಾಲೇಜು. ಉತ್ತಮ ತಂತ್ರಜ್ಞಾನ, ವಿಶ್ವ ಮಟ್ಟದ ವೃತ್ತಿಪರ ಕೌಶಲ್ಯಗಳೊಂದಿಗೆ ಉತ್ತಮ ವ್ಯಕ್ತಿತ್ವವನ್ನು ರೂಪಿಸುವ ಶ್ರೇಷ್ಠ ಶೈಕ್ಷಣಿಕ ಸಂಸ್ಥೆಯಾಗಿದೆ ಎಂದು ಬಿವಿವಿಎಸ್ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ನಿರ್ದೇಶಕರಾದ ಡಾ. ಆರ್. ಎನ್. ಹೆರಕಲ್ ಹೇಳಿದರು. ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಕಾಲೇಜಿನ ನೂತನ ಸಭಾಭವನದಲ್ಲಿ ಬಿಇ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಪಾಲಕರ ಸಭೆ ಮತ್ತು

Read More »
Breaking news

ಮಾನವರಹಿತ ತೂಕ ಅಳವಡಿಸಿ ರೈತರಿಗೆ ನ್ಯಾಯ ನೀಡಿ – ಶಾಸಕ ಜೆ.ಟಿ. ಪಾಟೀಲ

    ಬಾಗಲಕೋಟೆ:  ಸಕ್ಕರೆ ಕಾರ್ಖಾನೆಗಳಲ್ಲಿ ಮಾನವರಹಿತ ತೂಕ ಅಳವಡಿಸಿ ರೈತರಿಗೆ ನ್ಯಾಯ ಒದಗಿಸಿದರೆ, ಖುದ್ದಾಗಿ ಬಂದು ನಿಮಗೆ ಸನ್ಮಾನ ಮಾಡುತ್ತೇನೆ” ಎಂದು ಬೀಳಗಿ ಶಾಸಕ ಜೆ.ಟಿ. ಪಾಟೀಲ ಹೇಳಿದರು. ನಗರದ ಪ್ರತಿಕಾಭವನದಲ್ಲಿ ಸುದ್ದಿಗೋಷ್ಠಿ  ನಡೆಸಿ ಮಾತನಾಡಿದ ಅವರು,  ಇತ್ತೀಚೆಗೆ ಮಾಜಿ ಸಚಿವ ಮುರುಗೇಶ್ ನಿರಾಣಿಯವರು ನೀಡಿದ ಹೇಳಿಕೆಗಳಿಗೆ ತಿರುಗೇಟು ನೀಡಿದರು.  “ನನ್ನ ಮೇಲೆ ಭ್ರಷ್ಟಾಚಾರ ಆರೋಪಗಳನ್ನು ಸಾಬೀತುಪಡಿಸಲಿ. ನಾನು ಕುಟುಂಬ ರಾಜಕಾರಣ ಮಾಡಿಲ್ಲ. ಯಾರ ಹತ್ತಿರವೂ ಕಪ್ ಚಹಾ ಸಹ ಕುಡಿದಿಲ್ಲ. ವಿನಾಕಾರಣ ನನ್ನ ತೇಜೋವಧೆ

Read More »
Breaking news

ಗಿರಿಮಠದ ಗಿರಿ : ಧರ್ಮಸಾಮರಸ್ಯದ ಜೀವಂತ ಸಂಕೇತ

ಕಮತಪುರ : ಇತ್ತೀಚಿನ ಸಮಾಜದ ವಾತಾವರಣವನ್ನು ಗಮನಿಸಿದರೆ ಧರ್ಮ–ಜಾತಿ ಹೆಸರಿನಲ್ಲಿ ವಿಭಜನೆ ಉಂಟುಮಾಡುವ ಶಕ್ತಿಗಳು ಹೆಚ್ಚುತ್ತಿವೆ. ರಾಜಕೀಯ ಲಾಭಕ್ಕಾಗಿ ಜನರ ಮನಸ್ಸಿನಲ್ಲಿ ಅನುಮಾನ, ದ್ವೇಷ, ಅಸಹನೆ ಮೂಡಿಸುವ ಪ್ರಯತ್ನ ನಡೆಯುತ್ತಿದೆ. ಇಂತಹ ಸಂದರ್ಭಗಳಲ್ಲಿ ಸಾಮರಸ್ಯದ ಬದುಕು ಅಸಾಧ್ಯವೇನೋ ಎಂಬ ಭಾವ ಮೂಡುತ್ತದೆ. ಆದರೆ ಇತಿಹಾಸವನ್ನು ತಿರುಗಿ ನೋಡಿದರೆ ನಮಗೆ ದಾರಿದೀಪವಾಗುವ ಅನೇಕ ಉದಾಹರಣೆಗಳು ಸಿಗುತ್ತವೆ. ಅವುಗಳಲ್ಲಿ ಕಮತಪುರದ ಗಿರಿಮಠದ ಗಿರಿ ಒಂದು. ಮಸೀದಿಯು ಭಕ್ತಿಯ ಮಂದಿರವಾದದ್ದು ಮಲಪ್ರಭಾ ನದಿಯ ತಟದಲ್ಲಿ ನಿಂತಿರುವ ಈ ಗಿರಿ ಮೂಲತಃ ಆದಿಲ್

Read More »

ತಾಯಿಯ ಹಾಲು – ಮಗುವಿಗೆ ಅಮೃತ : ಪ್ರೊ. ಜಯಶ್ರೀ ಇಟ್ಟಿ

ಬಾಗಲಕೋಟೆ: ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಬಿ.ವಿ.ವಿ.ಎಸ್ ನರ್ಸಿಂಗ್ ವಿಜ್ಞಾನ ಮಹಾವಿದ್ಯಾಲಯದ ವತಿಯಿಂದ ಸ್ತನ್ಯಪಾನದ ಮಹತ್ವವನ್ನು ಸಾರುವ ಕಾರ್ಯಕ್ರಮವನ್ನು ಬಾಗಲಕೋಟೆ ತಾಲ್ಲೂಕಿನ ಕೌಲಪೇಟದಲ್ಲಿಯ ಅಂಗನವಾಡಿ ಕೇಂದ್ರ ಸಂಖ್ಯೆ 30ರಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯೆ ಪ್ರೊ. ಜಯಶ್ರೀ ಇಟ್ಟಿ ಅವರು ವಹಿಸಿದ್ದರು. ಬಳಿಕ ಮಾತನಾಡಿದ ಅವರು,  “ತಾಯಿಯ ಎದೆ ಹಾಲು ಮಗುವಿಗೆ ಬಹುಮುಖ್ಯ. ಸ್ತನ್ಯಪಾನದಿಂದ ಮಗುವಿಗೆ ಶಕ್ತಿ, ರೋಗ ನಿರೋಧಕ ಶಕ್ತಿ ಮತ್ತು ಸಂಪೂರ್ಣ ಪೌಷ್ಟಿಕಾಂಶ ದೊರೆಯುತ್ತದೆ. ಈ ಹಾಲು ಮಕ್ಕಳಿಗೆ ಸೈನಿಕ ಶಕ್ತಿಯಂತೆ ರಕ್ಷಣೆ

Read More »
Breaking news

ಒಂಟಿಕಾಲಿನಿಂದ ಬದುಕಿಗೆ ನೇಯ್ದ ಕಲ್ಪನೆ – ರಾಜ್ಯ ಪ್ರಶಸ್ತಿಗೆ ಪಾತ್ರರಾದ ಲಕ್ಷ್ಮಣ ಕಕ್ಕನ್ನವರ

ಬಾಗಲಕೋಟೆ (ಕಮತಗಿ):ಬಡತನ, ಅಂಗವಿಕಲತೆ, ಜೀವನದ ಅನೇಕ ಸವಾಲುಗಳು—ಇವೆಲ್ಲವೂ ನೇಕಾರ ಲಕ್ಷ್ಮಣ ಕಕ್ಕನ್ನವರ ಅವರನ್ನು ತಡೆಯಲಿಲ್ಲ. ಕೇವಲ ಒಂಟಿ ಕಾಲಿನಿಂದ ಸೀರೆ ನೇಯುವ ಅಪೂರ್ವ ಸಾಮರ್ಥ್ಯ ಹೊಂದಿರುವ ಈ ದುಡಿಮೆಯ ಕಲಾವಿದ ಇತ್ತೀಚೆಗೆ ರಾಜ್ಯ ಸರ್ಕಾರದ ನೇಕಾರ ಪ್ರಶಸ್ತಿಗೆ ಆಯ್ಕೆಯಾಗಿ, ಕಮತಗಿ ಪಟ್ಟಣದ ಹೆಮ್ಮೆ ಹೆಚ್ಚಿಸಿದ್ದಾರೆ. ಆಗಸ್ಟ್ 7ರಂದು ಬೆಂಗಳೂರಿನ ಕಬ್ಬನ ಪಾರ್ಕ್‌ನ ನೌಕರರ ಭವನದಲ್ಲಿ ನಡೆಯಲಿರುವ ನೇಕಾರ ದಿನಾಚರಣೆ ಕಾರ್ಯಕ್ರಮದಲ್ಲಿ, ರಾಜ್ಯದ ಐವರು ಮಹನೀಯ ನೇಕಾರರೊಂದಿಗೆ ಕಕ್ಕನ್ನವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಈ ಗೌರವವು ಅವರ ಕಲೆಯ

Read More »